ಸನಾತನ ಧರ್ಮದ ಅನುಯಾಯಿಗಳಿಗೆ ಹಾಗೂ ವೇದಾಸಕ್ತರಿಗೆ ಅನುಕೂಲವಾಗುವಂತೆ, ಋಗ್ವೇದೀಯ ಹಾಗೂ ಯುಜುರ್ವೇದೀಯ ಉಪಯುಕ್ತ ಮಂತ್ರಗಳನ್ನು ಕಲಿಸುವುದರೊಂದಿಗೆ, ನಿತ್ಯ ಅನುಷ್ಟಾನಕ್ಕೆ ಅಗತ್ಯವಿರುವ ಸಂಧ್ಯಾವಂದನೆ, ನಿತ್ಯ ದೇವತಾರ್ಚನೆ,ಅಗ್ನಿಕಾರ್ಯ,ಬ್ರಹ್ಮಯಜ್ಞ ಮತ್ತು ಔಪಾಸನೆ ಇತ್ಯಾದಿಗಳ ಮಂತ್ರ ಭಾಗ ಮತ್ತು ವಿಧಿ ವಿಧಾನಗಳನ್ನು ಹೇಳಿಕೊಡಲಾಗುವುದು ಹಾಗೂ ವೇದದ ಅಂಗವೆಂದು ಕರೆಯಿಸಿಕೊಳ್ಳುವ ಜ್ಯೋತಿಷ ಜ್ಞಾನವನ್ನೂ ಹೇಳಿಕೊಡುವ ತರಗತಿಗಳನ್ನು ಸಹ ಪಾಠಶಾಲವತಿಯಿಂದ ಆಯೋಜಿಸಲಾಗಿದೆ. ಇದರ ಜೊತೆಗೆ ಪಾಠಶಾಲೆಯಲ್ಲಿ ಯೋಗ ತರಬೇತಿ ಮತ್ತು ಸ೦ಸ್ಕೃತ ಪಾಠಗಳನ್ನೂ ಮಾಡಲಾಗುತ್ತಿದೆ.
ಶ್ರೀ ಸನಾತನವೇದಪಾಠಶಾಲೆಯು ದಿನಾಂಕ 26-01-2018 ರಂದು ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿರುವ ವಿದ್ಯಾರಣ್ಯಪುರದಲ್ಲಿ ವೇದಪುರುಷನ ಅನುಗ್ರಹದಿಂದ ಶುಭಾರಂಭವಾಯಿತು. ಈ ವೇದಪಾಠಶಾಲೆಯ ಪ್ರವರ್ತಕರಾದ ವೇದಬ್ರಹ್ಮ.ಶ್ರೀ ಹರೀಶ ಶರ್ಮರವರು (ಶೈವಾಗಮ ಪ್ರವೀಣ) ಆದಿಯಲ್ಲಿ ಗುರುಮುಖೇನ ಪದ್ಧತಿಯಲ್ಲಿ ವೇದಪಾಠವನ್ನು ಆರಂಭಿಸಿ ಪ್ರಸ್ತುತ ಅಂತರ್ಜಾಲದ - ONLINE ಮಾಧ್ಯಮದಲ್ಲಿಯೂ ಈ ಕೆಳಕಂಡ ಪ್ರಶಿಕ್ಷಣಗಳನ್ನು ಹೇಳಿಕೊಡುತ್ತಿದ್ದಾರೆ.